ಹಣತೆ

ಹಣತೆ ಆರಲು ಅಡಿ ಇಡುತಿದೆ,
ಬತ್ತಿ ಇರುವ ಉಸಿರ ಒಗ್ಗೂಡಿಸಿ
ಹೋಗಿ - ಬರುವವರ ಬೇಡುತಿದೆ,
ಹುಟ್ಟಿನಿಂದಲೇ ಕತ್ತಲಿನೊಂದಿಗೆ
ಜಿದ್ದಿಗೆ ಬಿದ್ದಿರುವ ಬೆಳಕಿನ ಸಾರಥಿಯ
ಜೀವ ಅಳಿಯುವ ಅನತಿ ದೂರದಲ್ಲಿದೆ,
ಬೇಕಾದವರು ಜೀವ ಜಲವ ನೀಡಿ ಪೊರೆಯಬೇಕಿದೆ...!!

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಒಂದು ಅಲಾರಾಂನ ಕಥೆ

ನನಗಾಗಿ