ಒಮ್ಮೆಲೇ ಉಸಿರು ಹಾರಿ, ಸುತ್ತಲೂ ಕತ್ತಲಾಗಿ ಎಲ್ಲವೂ ಸ್ತಬ್ಧವಾಗಿದೆ ಇಲ್ಲದ ಮನಸ್ಸಿನಿಂದ ಬೆಂಕಿ ಪೊಟ್ಟಣವ ತಡಕಾಡಬೇಕಿದೆ, ಛೇ...!! ಯಾರನ್ನು ಶಪಿಸುವುದು .. ಗಾಳಿಯನ್ನೋ ...?! ದೀಪದ ಎಣ್ಣೆಯನ್ನೋ...?!
ಹಣತೆ ಆರಲು ಅಡಿ ಇಡುತಿದೆ, ಬತ್ತಿ ಇರುವ ಉಸಿರ ಒಗ್ಗೂಡಿಸಿ ಹೋಗಿ - ಬರುವವರ ಬೇಡುತಿದೆ, ಹುಟ್ಟಿನಿಂದಲೇ ಕತ್ತಲಿನೊಂದಿಗೆ ಜಿದ್ದಿಗೆ ಬಿದ್ದಿರುವ ಬೆಳಕಿನ ಸಾರಥಿಯ ಜೀವ ಅಳಿಯುವ ಅನತಿ ದೂರದಲ್ಲಿದೆ, ಬೇಕಾದವರು ಜೀವ ಜಲವ ನೀಡಿ ಪೊರೆಯಬೇಕಿದೆ...!!