Posts

Showing posts from April, 2017

ಶ್ರೀ ವೇಣು ಗೋಪಾಲಸ್ವಾಮಿ ದೇವಾಲಯ, ಹೊಸ ಕನ್ನಂಬಾಡಿ

Image
  This article was published in Prajavani on 06 May 2019 in Reformed format Please Read it Here  click here     (Read Below)            ಫೈನಲ್ ಇಯರ್, ಕಾಲೇಜು ಬೇರೆ ಇಲ್ಲ ಸೋಮವಾರ ಏನ್ಮಾಡೋದು ಅಂತಾ ಇದ್ದಾಗ,  ನಾನು ನೋಡದೇ ಇರೋ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ನೋಡಣ ಅಂತ ಡಿಸೈಡ್ ಮಾಡಿದೆ. ನಾನು ಮತ್ತೆ ಫ್ರೆಂಡ್ ಹೊರಟ್ವಿ ನಂದೇ ಬೈಕ್ ಅಲ್ಲಿ. ಬೃಂದಾವನ ಗಾರ್ಡನ್             ನಮ್ ಕಾಲೇಜಿಂದ ಸುಮಾರು 25 ಕಿ.ಮೀ. ಇರ್ಬಹುದು. ಮಧ್ಯಾಹ್ನ ೨ ಗಂಟೆ ಸುಮಾರಿಗೆ ಹೊರಟ್ವಿ. ಅದೇ ದಾರೀಲಿ ಮೊದ್ಲು ಬಲಮುರಿಗೆ ಹೋಗೋ ದಾರಿ ತಿರುವು ಬರತ್ತೆ ಆದ್ರೆ ನಾನು ಸುಮಾರು ಸಲ ನೋಡಿದ್ರಿಂದ ಹಂಗೆ ಮುಂದೆ ಹೋದ್ವಿ.  ಮೈಸೂರಿಂದ ೧೪ ಕಿ.ಮೀ. ದೂರ ಅನ್ಸುತ್ತೆ ಅಲ್ಲಿ ಕೆ.ಅರ್.ಎಸ್ ಡ್ಯಾಮ್ & ಬೃಂದಾವನ ಗಾರ್ಡನ್ ಇದೆ. ನೋಡಿ ೨ ವರ್ಷ ಆಗಿದ್ರಿಂದ ನೋಡನ ಅಂತ ಹೋದೆ. ಒಬ್ಬರಿಗೆ ೨೫/- ಟಿಕೆಟ್ಟು, ಯಪ್ಪಾ ಹೆವೀ ಬಿಸಿಲು ಎಷ್ಟು ಬಿಸಿಲು ಅಂದ್ರೆ ಕಾಲು ನೆಲದ ಮೇಲೆ ಇಡಕಾಗಲ್ಲ ಅಷ್ಟು . ಬೇಗ ಹೋಗಿ ಅಲ್ಲಿರೋ ಕಾವೇರಮ್ಮನಿಗೆ ನಮಸ್ಕಾರ ಮಾಡಿ ವಾಪಾಸ್ ಬರೋ ದಾರೀಲಿ ಗೇಟ್ ಹತ್ರ ಮತ್ಸ್ಯಾಲಯ ಇತ್ತು. ೫ ರೂ ಟಿಕೆಟ್ ಸಖತ್ ಇತ್ತು ಹೋದ್ರೆ ಮರಿದೇ ನೋಡ್ಬೇಕು. ತರ-ತರದ ಮೀನು ಇದ್ವು ಡೆಕೋರೇಷನ್ ಫಿಷಸ್, ನೋಡಿ ಆ ಬಿಸಿಲಿಗೆ ಸ್ವಲ್ಪ ತಂಪಾದಂಗೆ ಆಯ್ತು. ಮತ್ಸ್ಯಾಲಯದ ಗೋಲ್ಡ್ ಫಿಶ್           ಸರಿ, ಅ

ಪ್ರಕೃತಿಯ ಮಡಿಲು

Image
ಕಲ್ಲು ಮಣ್ಣಿನ ಬೃಹತ್ ರಾಶಿ ಇಂದ ಹೊರಬರುವ ಬೆಂಕಿ ಚೆಂಡು! ಬಿಸಿಲು ನೆಲಕ್ಕೆ ತಾಕದಂತೆ ತಡೆಯುವ ಭುವಿಗಂಟಿದ ಜೀವಂತ ಮರದ ತುಂಡುಗಳು! ಬಗೆ ಬಗೆಯ ಬಣ್ಣದ ವಿಧ ವಿಧದ ಗಾತ್ರದ ಓಡಾಡುವ - ಹಾರಾಡುವ ಪದಾರ್ಥಗಳು! ಮಳೆ ಸುರಿದು ಕಾನನದ ತುಂಬಾ ಹರಿಯುವ ಜೀವಜಲ!! ಸುಂದರ ಪ್ರಕೃತಿ ಮಾತೆಯ ಮಡಿಲ ಜೀವನ ♡

ನರನಿಲ್ಲದ ನೀರವ ಮೌನ

ಕಾಡು-ಕಾನನ ಹರಿವ ಝರಿ ಗಿರಿ-ಬೆಟ್ಟಗಳು, ಅರಣ್ಯವಾಸಿಗಳ ಪರಮ ಬೀಡು, ನರನಿಲ್ಲದ ನೀರವ ಮೌನ, ಕಾಲಚಕ್ರಕ್ಕೆ ಹೊಂದಿಕೊಂಡ ಜೀವರಾಶಿ, ಭೂ ಲೋಕ ಸ್ವರ್ಗ ಅಲ್ಲಿತ್ತು  !!೧!! ಗುಡ್ಡದಿಂದ ಅನತಿ ದೂರಕ್ಕೆ ಮನೆ ಮಾಡಿ, ಬೆಳಗೆದ್ದು ಸಗಣಿ ಬಾಚಿ ಹಾಲ್ಕರೆದು, ಹೊಟ್ಟೆಯ ಕೂಳಿಗೆ ಉಳುಮೆ ಮಾಡಿ, ಮತ್ತದೇ ಪ್ರಕೃತಿಯೇ ತನ್ನ ಜೀವನಾಡಿಯಾಗಿ, ಮನತುಂಬಿ ಸಂಸ್ಕೃತಿ ಪರಂಪರೆ ಬೆಳೆಸಿದ ಇವರೇ ಪುಣ್ಯಾತ್ಮರು  !!೨!! ಗಿರಿ ಪರ್ವತಗಳ ಸಾವರಿಸಿ ಮರಗಿಡಗಳ ತುಂಡರಿಸಿ, ಆಗಸವನ್ನೇ ಮುಟ್ಟುವ ಕೃತಕ ಪರ್ವತ ನಿರ್ಮಿಸಿ, ಬಣ್ಣ ಬಣ್ಣಗಳ ಅಲಂಕಾರ, ಗಾಜಿನಿಂದಲೇ ನಿರ್ಮಿತ ಮಹಲುಗಳು, ಮುಂದೊಬ್ಬ ಟೊಪ್ಪಿ-ಕೋಲಿನ ಕೈಗೊಂಬೆ, ಏನಿದ್ದರೂ ಎಲ್ಲಾ ಬೇಕೆನ್ನುವ ಹಪಾಹಪಿ, ಕೊನೆಗೂ ತೀರದ ಬವಣೆ !!೩!!