Posts

Showing posts from March, 2017

India - Farmer

Image
Only people who live in the cities are citizen’s!!.Media and government actions seems to be in that way that, people who live in rural part are uncivilized suggestively. Each year’s budget or any yojanas ( projects) is confined only to cities like Bengaluru, No projects have been to useful to villages, none of projects made keeping villages solely in mind. Every year any party coming to power just makes lame effort to solve problems of farmers across. Even during the terrible famine governments just care for supplying water in any means to the cities but never they support villagers or farmers .Dam-lakes were built keeping main objective of agriculture ,providing water to farming ,but those built dam-lakes are now confined for supplying water to cities. Farmers are quitting agriculture, leaving villages due to unavailability of feeds to chattels and even unavailability water for farming. Due to no income by any means farmers are committing suicide . Even after such so many suic

ಯುಗಾದಿ ಚಂದ್ರ

Image
ಕಾದು ಕಾತರದಿ ತಡಕಿ ಎಲ್ಲರೊಂದಾಗಿ ಹುಡುಕಿದರೂ ಸಿಗದೆ ತಟ್ಟನೆ ಮೋಡಗಳಡಿಯಿಂದ ಹೊರಬಂದು ಕೈ ಮುಗಿದು ನಮಸ್ಕರಿಸಿ ನೋಡುವಲ್ಲಿ ಹೊಸ ವರ್ಷಕೆ ಹೊಸ ಚೈತನ್ಯ - ಹುರುಪು ತುಂಬಿ ಮರೆಯಾಗಿದ್ದಾನೆ. ಅಲ್ಲಿದ್ದಾನೆ ಕಂಡರೆ ನಮಸ್ಕರಿಸಿ 😀

ರೈತ - ಭಾರತ

Image
ನಗರಗಳಲ್ಲಿ ವಾಸಿಸುವವರು ಮಾತ್ರ ನಾಗರಿಕರು, ಗ್ರಾಮೀಣ ಭಾಗದಲ್ಲಿ ವಾಸಿಸುವವರು ಅನಾಗರಿಕರೇನೋ ಎಂಬ ಭಾವ ಮೂಡಿಸುವಂತೆ ಮಾಧ್ಯಮ ಹಾಗೂ ಸರ್ಕಾರದ ನಡೆಗಳು ತೋರುತ್ತವೆ. ಪ್ರತೀ ಬಾರಿಯ ಬಜೆಟ್ ಅಥವಾ ಯಾವುದೇ ಯೋಜನೆಗಳಲ್ಲಾದರೂ ಬೆಂಗಳೂರಿಗಿಷ್ಟು, ಬೆಳಗಾವಿಗಿಷ್ಟು ಎಂಬ ಯೋಜನೆ ಕೇಳಿದ್ದೇವೆಯೇ ಹೊರತು ಆ ಹಳ್ಳಿಗಿಷ್ಟು ಈ ಹಳ್ಳಿಗಿಷ್ಟು ಎಂದು ಎಲ್ಲೂ ಕೇಳೋಲ್ಲ. ಪ್ರತಿ ಬಾರಿಯೂ ರೈತನನ್ನು ಮುಂದಿಟ್ಟುಕೊಂಡು ಕಣ್ಣೊರೆಸುವ ನಾಟಕವನ್ನು ಎಲ್ಲಾ ಪಕ್ಷಗಳು ಮಾಡಿಯೇ ತೀರುತ್ತವೆ.              ಭಯಾನಕ ಬರಗಾಲದ ಸಮಯದಲ್ಲೂ ನಗರಗಳಿಗೆ ನೀರೊದಗಿಸಲು ಸರಕಾರಗಳು ಮುಂದಾಗುತ್ತವೆಯೇ ಹೊರತು ಹಳ್ಳಿಗರ ಗೋಳು ಎಂದಿಗೂ ಕೇಳಲಾರವು. ಕೃಷಿಯೇ ಮುಖ್ಯ ಉದ್ದೇಶವಾಗಿ ನಿರ್ಮಿಸಿದ ಆಣೆಕಟ್ಟೆ-ಕೆರೆ ಗಳು ಈಗ ನಗರಗಳಿಗೆ ನೀರು ಸರಬರಾಜು ಮಾಡುವ ಆಗರಗಳಾಗಿವೆ. ರಾಸುಗಳಿಗೆ ಮೇವಿಲ್ಲದೇ, ಇತ್ತ ಬೆಳೆಯೂ ಇಲ್ಲದೇ, ಬೆಳೆಸಾಲ - ಕುಡಿವ ನೀರಿಗೂ ಹಾಹಾಕಾರವಾಗಿ ಹಳ್ಳಿ ತೊರೆದು ರೈತ ಗುಳೇ ಹೊರಟಿದ್ದಾನೆ. ಆತ್ಮಹತ್ಯೆಯ ದಾರಿಯನ್ನೂ ಹಿಡಿದಿದ್ದಾನೆ. ಇದೆಲ್ಲದರ ಮೇಲೂ ಸರಕಾರಗಳಿಗೆ ಜಾಗತಿಕ ಮಟ್ಟದಲ್ಲಿ ತಮ್ಮ ಮಹಾನಗರಗಳ ಹೆಸರು ಕಾಣಲು ಉತ್ಸಾಹ. ಸಾಯುವವರು ಸತ್ತರೆ ನಮಗೇನು ನಷ್ಟ ಎಂಬಂತೆ ಅವರ ಭಾವ.              ಇದನ್ನೇ ನೋಡುತ್ತಾ ಬೆಳೆಯುವ ಯುವ ಜನತೆ ಮುಂದೊಂದು ದಿನ ಊರ ಬಾಗಿಲು ಮುಚ್ಚಿ ನಗರ ಸೇರಿದರೆ ಅಚ್ಚರಿಯೇನಿಲ್ಲ.  ಎಲ್ಲರನ್ನೂ ತುಂಬಿಸಿಕೊಳ್ಳುವ ನಗರಗಳ ಗತಿ

ಇಳೆ-ಮಳೆ

Image
ಕಾದು ಕಾದು ಬಳಲಿ ಬೆಂಡಾಗಿ ರೋಸಿ ಹೋದ ಜೀವ, ಮಳೆಯೆಂಬ ಪುನರ್ಜನ್ಮ ಇಳೆ ತಣಿಸಿದಾಗ, ಅದ ಮುಟ್ಟಿ ಕಣ್ಣಿಗೊತ್ತಿಕೊಂಡ  ರೈತನ ಸಂತಸಕ್ಕೆ ಸರಿಸಮನಾದ ತೃಪ್ತಿ ಮತ್ತೊಂದಿಲ್ಲ. 💗

ಭಾರತ - ಕನ್ನಡ

Image
೧೮೫೭ ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭ ಆಯ್ತು. ಇದಾದ ನಂತರ ಅನೇಕ ಚಳುವಳಿಗಳು, ದಂಗೆಗಳು ನಡೆದು ಹೋದುವು. ಅಸಂಖ್ಯ ಹೊರಟಗಾರರು ನಡೆಸಿದ ಅವಿರತ ಪ್ರಯತ್ನದ ಫಲವಾಗಿ ೧೯೪೭ ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ತು. ಆದರೂ ಅಖಂಡ ಭಾರತದ ಕನಸು ಕನಸಾಗಿಯೇ ಉಳಿಯುವಂತಾಯ್ತು. ಇನ್ನು  ಸಂವಿಧಾನ ಅಸ್ತಿತ್ವಕ್ಕೆ ಬಂದದ್ದು ೧೯೫೦ ರಲ್ಲಿ. ಭಾಷಾವಾರು ಪ್ರಾಂತ್ಯಗಳ ರಚನೆ ಆಗಿದ್ದು ೧೯೫೬ ರಲ್ಲಿ.                ಇದೇ ರೀತಿ ಕನ್ನಡ ಭಾಷೆ, ಸುತ್ತಲಿನ ವಾತಾವರಣ ಹಾಗೂ ಅನೇಕ ನಿರ್ದಿಷ್ಟ ಕಾರಣಗಳೊಂದಿಗೆ ಅನೇಕರ ಹೋರಾಟದ ಫಲವಾಗಿ ಮೈಸೂರು ರಾಜ್ಯ ಉಗಮವಾಯಿತು, ಕಾಲಾಂತರದಲ್ಲಿ ಇದು ಕರ್ನಾಟಕ ರಾಜ್ಯವೂ ಆಯ್ತು. ಕನ್ನಡ ಈಗ ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದು. ಸುಮಾರು ೧೭೦೦ ವರ್ಷಗಳಿಗೂ ಹಳೆಯ ಇತಿಹಾಸ ಹೊಂದಿರುವ ಭಾಷೆ. ತನ್ನ ಸಾಹಿತ್ಯವನ್ನು ವಿವಿಧ ಪ್ರಕಾರಗಳಲ್ಲಿ ಸಂಪನ್ನವಾಗಿಸಿಕೊಂಡಿದೆ.                   ೧೯೪೭ ಕ್ಕಿಂತ ಹಿಂದೆ ತಮ್ಮ ದೇಶ ಯಾವುದು ಎಂಬುದಕ್ಕೆ ಉತ್ತರಗಳೇ ಬೇರೆ ಇದ್ದವೋ ಏನೋ.! ಆದರೆ ಬ್ರಿಟಿಷರು ತೊಲಗಿದ ನಂತರ ಇದು ತಾಯಿ ಭಾರತಾಂಬೆಯ ಆಸ್ಥಾನವಾಯಿತು. ಮೊದಲ ದಂಗೆಯಿಂದ ಇಲ್ಲಿಯವರೆಗೂ ಸುಮಾರು ೧೫೦ ವರ್ಷಗಳಾಗಿರಬಹುದು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದ ಸಾರ ಏಕೋ ಕ್ರಮೇಣ ಬದಲಾಗುತ್ತಿರುವಂತೆ ತೋರುತ್ತಿದೆ. ಹಿಂದಿ ಬಹುಭಾಷಿಕರಿರುವ ನಮ್ಮ ದೇಶದಲ್ಲಿ, ಹಿಂದಿಯೇತರ ಭಾಷಾ ರಾಜ್ಯಗಳಲ್ಲಿ