Posts

ನಂಬಿಕೆಯ ದೀಪ

Image
ನನ್ನೊಡನೆ‌‌ ನಾ ಕಳೆದು, ಮೌನ‌ ಮೇಲಾಗಿ, ಹೃದಯಯದ ಭಾರದಿ ಪದಗಳೆಲ್ಲ ಸಿಲುಕಿವೆ. ನೆನಪುಗಳ ರಾಶಿ ಎದೆಯನಾವರಿಸಿ, ಕನಸುಗಳರಮನೆಯೇ ನೆಲಕಚ್ಚಿದೆ. ಬಾಳಿನ ಪಯಣದಿ, ದಾರಿಗಳು ಕವಲೊಡೆದು, ಒಂದು ಮನದ ಬಯಕೆಯಾಸೆಗೆ ಪಯಣವೇ ದಿಕ್ಕು ತಪ್ಪಿದೆ. ನಂಬಿಕೆಯ ದೀಪವು, ಮಸುಕಾಗಿ ನಿಂತು, ಇಂದಿನ ನೋವಿಗೆ,  ನಾಳೆ ಉತ್ತರವಿರಬಹುದೆಂದು,  ಕಾದು ಕುಳಿತಿದೆ.

Life Update

Image
(This is just an ordinary story of how my life unfolded— just something I felt like sharing.) I hail from a small village near Davangere. My early education shaped me in the calm of my hometown and later in Shivamogga. The turning point began at Alva’s PU College, followed by my Bachelor of Engineering at NIE, Mysore. After graduation, I stood at a fork in the road: take up a job or chase the dream of civil services. On August 15, 2017, I chose the latter, joining Universal Coaching Centre in Attiguppe, Bengaluru. From that day, life transformed into a long, winding path of preparation, hope, and hard lessons. Over the years, I attempted two UPSC mains, given one interview, wrote two KPSC KAS mains, the AC SAAD mains, CAPF, CSIR, and many other exams. Each attempt brought me closer, yet success remained like a glass ceiling—visible, tangible, but just out of reach. (Two mains results awaited.) Financially, my family stood by me like a pillar. Yet, I chose to ease their burd...

ಪರೀಕ್ಷೆ

Image
ಮೊನ್ನೆ ಪರೀಕ್ಷೆಯೊಂದರ ಇನ್ವಿಜಿಲೇಷನ್ ಗಾಗಿ ಕಾಲೇಜೊಂದಕ್ಕೆ ಹೋಗಬೇಕಾಯಿತು, ಸ್ವಲ್ಪ ತಡವಾಗಿ ಕೇಂದ್ರ ತಲುಪಿದ ನನಗೆ... ನಾನು ಹೋಗಬೇಕಾದ ಕೊಠಡಿ ಹಾಗೂ ಪತ್ರಿಕೆಗಳ ಕವರ್ ನೀಡಿ ಸಂಯೋಜಕರು ಹಾದಿ ತೋರಿದರು.      ಹೋದವನೇ ಉತ್ತರ ಪತ್ರಿಕೆಗಳ ಬಂಡಲ್ ತೆಗೆದು, ಮೊದಲನೇ ಬೆಂಚಿನಲ್ಲಿ‌ ಕೂತಿದ್ದ ಹುಡುಗಿಗೆ ಒಂದು ಶೀಟ್ ತೆಗೆದುಕೊಂಡು ಉಳಿದವನ್ನು ಹಿಂದಕ್ಕೆ ಪಾಸ್ ಮಾಡುವಂತೆ ಹೇಳಿದೆ, ಆ ಹುಡುಗಿ ನನ್ನ ಮುಖವನ್ನೇ ನೋಡುತ್ತಿತ್ತು...       ಆಗ ನಾನು ಕನ್ನಡ ಗೊತ್ತಿಲ್ಲವೇನೋ ಎಂದುಕೊಂಡು ಇಂಗ್ಲೀಷಿನಲ್ಲಿ ಒಮ್ಮೆ ಹೇಳಿದೆ, ಆಗಲೂ ಆ ಹುಡುಗಿ ಹಿಂದೆ ತಿರುಗಿ ಸಹಪಾಠಿಯನ್ನು ನೋಡಿ ನಕ್ಕು ಮತ್ತೆ ನನ್ನ ಕಣ್ಣು ಬಾಯಿಯನ್ನೇ ನೋಡಿತು... ಏನಾಗುತ್ತಿದೆ ಎನ್ನುವಷ್ಟರಲ್ಲಿ ನಾನು ಸ್ವಲ್ಪ ಏರು ಧ್ವನಿಯಲ್ಲಿ ಮತ್ತೊಮ್ಮೆ ಹೇಳಿದೆ.      ಆಗ ಆ ಮಗು ತನ್ನ ಕಿವಿ - ಬಾಯಿಯನ್ನು ತೋರಿಸುತ್ತಾ ತನಗೆ ಶ್ರವಣ - ಮಾತು ಬರುವುದಿಲ್ಲ ಎಂದು ಸನ್ನೆಯಲ್ಲಿ ತೋರಿಸಿತು... ಅಲ್ಲಿಂದ ಮುಂದೆ ಹತ್ತು-ಹದಿನೈದು ನಿಮಿಷ ನನ್ನ ದೇಹ ಯಾಂತ್ರಿಕವಾಗಿ, ಕೆಲಸ ಮಾಡಿತೇ ವಿನಃ ಮೆದುಳು ಮಾತ್ರ ಮಂಕು ಬಡಿದಂತೆಯೇ ಆಗಿಬಿಟ್ಟಿತು.

ಎಂ.ಎ ಕನ್ನಡ

Image
೨೦೨೦ ರ ಫೆಬ್ರವರಿಯಲ್ಲಿ ಯುಪಿಎಸ್ಸಿ ಐಚ್ಚಿಕ ವಿಷಯವಾಗಿದ್ದ ಕನ್ನಡ ಸಾಹಿತ್ಯದ ಪಠ್ಯವೇ ಬಹುವಾಗಿದ್ದು ನನ್ನ ಓದಿನೊಂದಿಗೆ ಪೂರಕವಾಗಿರುತ್ತದೆಂದು ಭಾವಿಸಿ ತಮ್ಮನಿಂದ ಹಣ ಪಡೆದು ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಎಂ.ಎ. ಕನ್ನಡ ಪದವಿ ಸೇರಿಕೊಂಡೆ.             ಮುಂದೆ ಎಲ್ಲರೂ ತೊಡಗುವಂತೆ ಬಂದ ಮಹಾಮಾರಿಯ ಕೃಪಾಕಟಾಕ್ಷದಿಂದ ಪ್ರಥಮ ವರ್ಷದ ಪರೀಕ್ಷೆಗಳು ಸರ್ಕಾರದಿಂದ ರದ್ದುಗೊಂಡರೂ ವಿವಿಯು ತೆರೆದ ಪುಸ್ತಕ ಪರೀಕ್ಷೆ ನಡೆಸಿ ಫಲಿತಾಂಶ ನೀಡಿತು. ದ್ವಿತೀಯ ವರ್ಷದ ಪರೀಕ್ಷೆಗಳು ೨೦೨೨ರ ಎಪ್ರಿಲ್‌ನಲ್ಲಿ ನಡೆದವು, ಮಲ್ಲೇಶ್ವರಂನ ಕಾಲೇಜೊಂದರಲ್ಲಿ ಪರೀಕ್ಷೆ ಬರೆದದ್ದು, ೨೦೨೨ರ ಜುಲೈ ೨೨ರಂದು ಫಲಿತಾಂಶ ಪ್ರಕಟಗೊಂಡಿತು. ೭೨.೭% ಜೊತೆಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದೆನು.           ಇದಾಗಿ ಕೆಲವೇ ದಿನಗಳಲ್ಲಿ ನಮ್ಮ ಗುಂಪಿನ ಹಿರಿಯರೊಬ್ಬರು ಕರೆಮಾಡಿ, ಕಾಲೇಜೊಂದರಲ್ಲಿ ಅಧ್ಯಾಪಕರ ಅಗತ್ಯವಿದ್ದು ಅರ್ಜಿ ಹಾಕುವಂತೆ ತಿಳಿಸಿದರು. ಅದು ವಾರಕ್ಕೆ ಎಂಟು ಗಂಟೆಯ ತರಗತಿಗಳು, ವಾರಕ್ಕೆ ಮೂರು ದಿನ ಹೋಗಿ ಬರಬೇಕಿತ್ತು. ನನಗೆ ಓದಲು ಸಮಯ ಉಳಿಯುವುದೆಂದು ನಾನು ಅರ್ಜಿ ಹಾಕಿದೆ. ಮುಂದೆ ಸೇರ್ಪಡೆಯಾಗಿ ಆಗಸ್ಟ್‌ ಕೊನೆಯ ವಾರದಿಂದ ತರಗತಿಗಳು ಆರಂಭವಾದವು. ತರಗತಿ-ಪರೀಕ್ಷೆ-ವೈವಾ ಹೀಗೆ ತರಗತಿಗಳು ಮುಗಿದದ್ದೇ ತಿಳಿಯಲಿಲ್ಲ.        ...

ಒಂದು ಅಲಾರಾಂನ ಕಥೆ

Image
ಪಿಯು ಓದುವ ಸೆಪ್ಟೆಂಬರ್ ತಿಂಗಳ ಒಂದು ದಿನ (ದಿನ‌ ಖಂಡಿತಾ ನೆನಪಿಲ್ಲ), ನಾನು ದ್ವಿತೀಯ ಪಿಯು ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂದು ಸುಮಾರು ೧೨ ಗಂಟೆ ಮಧ್ಯಾಹ್ನ ಫಿಸಿಕ್ಸ್ ತರಗತಿ ನಡೆಯುತ್ತಿತ್ತು. ಕವಿತಾ ಮೇಡಮ್ ನಮ್ಮ ಟೀಚರ್, ಚೆನ್ನಾಗಿಯೇ ಪಾಠ‌ ಮಾಡುತ್ತಿದ್ದರು ಅಂತಿಟ್ಟುಕೊಳ್ಳಿ. ಅವರು ಪಾಠ ಮಾಡಿದ್ದು ಹಾಗೆಯೇ ಪ್ರಥಮ ಮತ್ತು ದ್ವಿತೀಯ ವರ್ಷದ ನಡುವಿನಲ್ಲಿ ನಡೆದ ಕ್ರಾಶ್ ಕೋರ್ಸ್ ಸಮಯದಲ್ಲಿ ತಿಳಿದ ಫಿಸಿಕ್ಸ್ ಬಗೆಗಿನ ಹಲವು ವಿಚಾರಗಳು ನನಗೆ ಫಿಸಿಕ್ಸ್ ನಲ್ಲಿ ಅತಿಯಾಗಿ ಆಸಕ್ತಿಯನ್ನು ಹೆಚ್ಚಿಸಿದ್ದವು‌‌. ಅದರಲ್ಲೂ ಪ್ರಮುಖವಾದವು ನ್ಯೂಕ್ಲಿಯರ್ ಫಿಸಿಕ್ಸ್, ಆಸ್ಟ್ರೋ ಫಿಸಿಕ್ಸ್ ಮತ್ತು ಇಲೆಕ್ಟ್ರೋಮ್ಯಾಗ್ನೆಟಿಸಂ.      ನಮ್ಮ‌ ಪಠ್ಯದ ಹೊರತಾಗಿಯೂ ಫಿಸಿಕ್ಸ್ ನ ಹಲವು ವಿಚಾರಗಳನ್ನು ತಿಳಿಯಲು ಮನಸ್ಸು ಹಾತೊರೆಯುತ್ತಿತ್ತು. ಇಂದಿಗೂ ನಾನು ಉತ್ಸಾಹದಿಂದ ಈ ವಿಷಯಗಳನ್ನು ಗಮನಿಸುತ್ತೇನೆ. ಇದೇ ಆಸಕ್ತಿ ದ್ವಿತೀಯ ಪಿಯು ಫಿಸಿಕ್ಸ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ತೆಗೆಯಲು ಸಾಧ್ಯವಾಯಿತು. ಅಂತೆಯೇ ಎಂಜಿನಿಯರಿಂಗ್ ನಲ್ಲಿ ಇಲೆಕ್ಟ್ರಿಕಲ್ ಆಯ್ಕೆ ಮಾಡಲೂ ಒಂದೆಡೆಯಿಂದ ಸ್ಪೂರ್ತಿಯಾಯಿತೆಂದರೆ ತಪ್ಪಲ್ಲ. ಆದರೆ ವಿದ್ಯಾರ್ಥಿಗಳೆಂದ ಮೇಲೆ ಬಹುತೇಕ ಎಲ್ಲರ ಮನೋಭಾವ ಒಂದೇ ಭಾವಿಸುತ್ತೇನೆ. ನಾವೆಲ್ಲಾ ಟೀಚರ್ಸ್ ನ ನೋಡೋದೇ ನಮ್ಮ ವಿರೋಧಿಗಳ ಹಾಗೆ, ಅವರು ನೋಟ್ಸ್ ಬರೀರಿ ಅಂದ್ರೂ ಕಷ್ಟ, ಆನ್ಸರ್ ಮಾಡು ಅಂದ್ರೂ...

ಪೆಟ್ರೋಲ್ ಬಂಕು

ಮೊನ್ನೆ ಪೆಟ್ರೋಲ್ ಹಾಕಿಸಲು ಇಲ್ಲೇ ಹತ್ತಿರದ ಬಂಕ್ ಒಂದಕ್ಕೆ ಹೋಗಿದ್ದೆ. ಮುಂದೊಂದು ದೋಭಿಯವನ ಗಾಡಿಯೂ ನಿಂತಿತ್ತು, ಆದರೆ ಬಂಕಿನಾತ ನನ್ನನ್ನು ನೋಡಿದ ಕೂಡಲೇ ಕರೆದು ಎಷ್ಟು ಪೆಟ್ರೋಲ್ ಬೇಕೆಂದು ಕೇಳಿ‌ ನಾನು ಹೇಳಿದಂತೆ, ೧೦೦ ರೂಪಾಯಿಗೆ ಹಾಕಿದ ನಂತರ ಮೋದಲೇ ನಿಂತು ಕಾದಿದ್ದ ದೋಭಿಯವನಿಗೆ ೪೦೦ ರೂಪಾಯಿಗಳ ಪೆಟ್ರೋಲ್ ಹಾಕಿ ಕಳಿಸಿದ.           ಅರೇ, ಇದರಲ್ಲಿ ಏನು ವಿಶೇಷ ಅನ್ಕೊಂಡ್ರಾ? ಅಥವಾ ದೋಭಿಯವನನ್ನು ಬಿಟ್ಟು ನನ್ನ ಗಾಡಿಗೆ ಪೆಟ್ರೋಲ್ ಹಾಕಿದ್ದು‌ ಕೇಳಿ ನಾನೇನು ದೊಡ್ಡ ಮನುಷ್ಯ ಅಂದುಕೊಂಡ್ರಾ? ಅಲ್ಲೇ ಇರೋದು ಮಾತು...           ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಎರಡು ಬಗೆಯ ಮೋಸ ನಾನು ಗಮನಿಸಿದ್ದೀನಿ. ಬಂಕಿನವರ ಈ ಕರಾಮತ್ತುಗಳು ನನಗೆ ಚಂದ್ರಾಲೇಔಟಿಗೆ ಬಂದ ಹೊಸತರಲ್ಲೇ ತಿಳಿಯಿತು. ಒಂದನೆಯದು, ಈ ರೀತಿ ಕಡಿಮೆ ಪೆಟ್ರೋಲ್ ಬೇಕಿರೋರಿಗೆ ಮೊದಲು ಹಾಕಿ ನಂತರ ಮೀಟರ್ ಜೀರೋ ಮಾಡದೇ ನಾನು ಹಾಕಿಸಿದ ೧೦೦ ರೂಗಳ ಮೇಲೆ ೨೦೦,೩೦೦,೪೦೦ ಹಾಕಿ ತೋರಿಸೋದು, ಇಲ್ಲಿ ದೋಭಿಗೂ ಅದೇ ಆಗಿತ್ತು.  ‌          ಎರಡನೆಯದು, ಉದಾಹರಣೆಗೆ ನಾನು ಐದು ನೂರು ನೋಟು ಕೊಟ್ಟು ನೂರು ರೂಪಾಯಿಗೆ ಪೆಟ್ರೋಲ್ ಹಾಕಿಸಿದೆ ಅಂತಿಟ್ಟುಕೊಳ್ಳಿ. ಬಂಕಿನವರು ಎಂತಾ ಖಿಲಾಡಿ ವಿದ್ಯೆ ಕಲಿತಿರ್ತಾರೆ ಅಂದ್ರೆ, ನೂರರ ಮೂರು ನೋಟನ್ನೆ ನಾಲ್ಕು ಎನ್ನುವ ರೀತಿ ನಮ್ಮ ...

ತೊಣ್ಣೂರು ಕೆರೆಯ ಗೆಳೆತನ

Image
ಕಾಲೇಜು ಮುಗಿದ ಬಳಿಕ ಮೈಸೂರಿಗೆ ಹಿಂದಿರುಗಿದಾಗ, ಸುಂದರ ತಾಣ ತೊಣ್ಣೂರು ಕೆರೆಗೂ ಹೋಗುವ ಮನಸಾಯಿತು. ಹಿಂದೊಮ್ಮೆ ಗೆಳೆಯರ ಜೊತೆ ಹೋಗಿದ್ದು ಆ ಸ್ಥಳ ಹಾಗೂ ಅಲ್ಲಿಯ ಸೂರ್ಯಾಸ್ತಮಾನ ನನ್ನ ಮನಸೂರೆಗೊಂಡಿತ್ತು.                     ಬೆಂಗಳೂರಿನಿಂದ ಬೆಳಗ್ಗೆ ನನ್ನ ಬೈಕ್ ನಲ್ಲೇ ಹೊರಟು ಮೈಸೂರು ತಲುಪಿದ್ದು ಮಧ್ಯಾಹ್ನದ ಹೊತ್ತಿಗೆ, ಕೆ.ಎಸ್.ಓ.ಯು ಹಾಸ್ಟೆಲ್ ನಲ್ಲಿ ತಂಗಲು ವ್ಯವಸ್ಥೆ ಆಗಿತ್ತು ಹೋಗಿ ವಿಶ್ರಾಂತಿ ತೆಗೆದುಕೊಂಡು ಸಂಜೆ ತೊಣ್ಣೂರು ಕೆರೆಗೆ ಹೋಗುವ ನಿರ್ಣಯ ಮಾಡಿದೆ. ನಿದ್ದೆಯಿಂದೆದ್ದು  ಹೊರಡುವುದು ಸ್ವಲ್ಪ‌ ಸಮಯವಾದ್ದರಿಂದ ಸೂರ್ಯಾಸ್ತದ ಸುಂದರ‌ ಚಿತ್ರಣ ಸಿಗುವುದೋ ಇಲ್ಲವೋ‌ ಎಂಬ ಭಯದಲ್ಲೇ ಹೊರಟೆ. ನಾನು ಅವತ್ತು ಬೈಕ್ ಓಡಿಸಿದ್ದು, ಮುಳುಗಲು ಹೋಗುತ್ತಿರುವ ಸೂರ್ಯನೊಂದಿಗೇ ರೇಸ್ ಹತ್ತಿದಂತಿತ್ತು.                     ಅಂತೂ ತಡವಾಗದೇ ಸಮಯಕ್ಕೆ ಸರಿಯಾಗಿ ತಲುಪಿದ್ದಾಯಿತು, ಸೂರ್ಯಾಸ್ತ ದರ್ಶನಕ್ಕೆ‌ ಅಡ್ಡಿಯಾಗುವಂತೆ‌ ಮೋಡಗಳಿದ್ದರಿಂದ ಅಷ್ಟೇನು ಸುಂದರವಾಗಿ ಕಾಣುತ್ತಿರಲಿಲ್ಲ, ಇದಕ್ಕೆ ಹಿಂದೆ ನಾನು ನೋಡಿದ ಅಮೋಘ ಸೂರ್ಯಾಸ್ತಮಾನದ ಸ್ಮರಣೆಯೇ ಕಾರಣ ಎಂದರೆ ತಪ್ಪಲ್ಲ.                    ಈ ಬಾರಿ‌ ಅಲ್ಲೊಂದು ಸಿನೆಮ...